rtgh

ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶ : ಯಾರೆಲ್ಲ ಇದಕ್ಕೆ ಅರ್ಜಿ ಸಲ್ಲಿಸಬಹುದು

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ಸರ್ಕಾರವು ಹೊಸ ನ್ಯಾಯಬೆಲೆ ಅಂಗಡಿಯನ್ನು ತೆರೆಯಲು ಅರ್ಜಿ ಆಹ್ವಾನಿಸಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಅವಶ್ಯವಿರುವ ಗ್ರಾಮ ಪ್ರದೇಶದಲ್ಲಿ ಹೊಸ ನ್ಯಾಯಬೆಲೆ ಅಂಗಡಿಯನ್ನು ತೆರೆಯಲು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಅದರಂತೆ ಹೊಸ ನ್ಯಾಯಬೆಲೆ ಅಂಗಡಿಯನ್ನು ಯಾರೆಲ್ಲ ತೆರೆಯಬಹುದು ಅಂದರೆ ಅರ್ಹತೆಗಳೇನು ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಎಂಬುದರ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.

Opportunity to open a new fair price shop
Opportunity to open a new fair price shop

ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ :

ಅವಶ್ಯವಿರುವ ಗ್ರಾಮ ಪ್ರದೇಶದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಹೊಸ ನ್ಯಾಯಬೆಲೆ ಅಂಗಡಿಯನ್ನು ತೆರೆಯಲು ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಅದರಂತೆ ನ್ಯಾಯ ಬೆಲೆ ಅಂಗಡಿ ಎಷ್ಟು ಹಣವನ್ನು ಸರ್ಕಾರ ನೀಡುತ್ತದೆ ಹಾಗೂ ನ್ಯಾಯಬೆಲೆ ಅಂಗಡಿ ತೆರೆಯಲು ಏನೆಲ್ಲಾ ಅರ್ಹತೆಗಳು ಬೇಕು ಎಂಬುದರ ಬಗ್ಗೆ ನೋಡುವುದಾದರೆ,

ನ್ಯಾಯಬೆಲೆ ಅಂಗಡಿ ತೆರೆಯಲು ಇರಬೇಕಾದ ಅರ್ಹತೆಗಳು :

ಆದಿವಾಸಿ ಮಹಿಳಾ ನೇಕಾರ ಅಂಗವಿಕಲ ವಿಕಲಚೇತನರು ಸೇರಿದಂತೆ, ರಾಜ್ಯದ ಸರ್ಕಾರದ ದಲ್ಲಿರುವ ಸಂಸ್ಥೆಗಳು ನಿಗಮ ಗ್ರಾಮ ಹಾಗೂ ಸ್ಥಳೀಯ ಪಂಚಾಯಿತಿಗಳು ಪ್ರಾಥಮಿಕ ಬಳಕೆದಾರರು ಕೃಷಿ ಪತ್ತಿನ ಸಂಘ ತೋಟಗಾರಿಕೆ ಶ್ರೀ ಶಕ್ತಿ ಹಾಗೂ ಮಹಿಳಾ ಸ್ವ ಸಹಾಯ ಗುಂಪುಗಳು ವಿವಿಧ ಸಹಕಾರಿ ಸಂಘಗಳು ಹಾಗೂ ತೃತೀಯ ಲಿಂಗಿಗಳನ್ನು ಆದ್ಯತೆಯ ಮೇರೆಗೆ ಹೊಸ ನ್ಯಾಯಬೆಲೆ ಅಂಗಡಿಯನ್ನು ತೆರೆಯಲು ಪರಿಗಣಿಸಲಾಗುತ್ತದೆ ಎಂದು ರಾಜ್ಯ ಸರ್ಕಾರವು ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಒಂದು ಪ್ರಕಟಣೆಯನ್ನು ಹೊರಡಿಸಿರುವುದರಲ್ಲಿ ತಿಳಿಸಲಾಗಿದೆ.

ಹೊಸ ನ್ಯಾಯ ಬೆಲೆ ಅಂಗಡಿ ತೆರೆಯಲು ಇರಬೇಕಾದ ದಾಖಲೆಗಳು :

ಹೊಸ ನ್ಯಾಯಬೆಲೆ ಅಂಗಡಿಯನ್ನು ನೀವೇನಾದರೂ ತೆರೆಯಲು ಯೋಚಿಸುತ್ತಿದ್ದಾರೆ ಕನಿಷ್ಠ ಮೂರು ವರ್ಷದ ಹಿಂದೆ ಅರ್ಜಿ ಸಲ್ಲಿಸಲು ಸಹಕಾರಿ ಸಂಘಗಳು ನೊಂದಾಯಿತರಾಗಿರಬೇಕು. ಬ್ಯಾಂಕುಗಳ ಮೊತ್ತ ಕನಿಷ್ಠ 2 ಲಕ್ಷ ರೂಪಾಯಿಗಳವರೆಗೆ ಬ್ಯಾಲೆನ್ಸ್ ಹೊಂದಿರಬೇಕಾಗುತ್ತದೆ. ಶ್ರೀ ಸಹಾಯ ಸಂಘಗಳು 12 ಲಕ್ಷ ರೂಪಾಯಿ ಹಾಗೂ 50,000ಗಳನ್ನು ವಿಕಲಚೇತನರು ಹಾಗೂ ತೃತೀಯ ಲಿಂಗಿಗಳು ಇದೇ ಮಾದರಿಯಲ್ಲಿ ಠೇವಣಿಯನ್ನು ಹೊಂದಿರಬೇಕು.
ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಕಳೆದ ಮೂರು ವರ್ಷಗಳ ದೃಢೀಕರಣ ಲೆಕ್ಕ ಪರಿಶೋಧನಾ ವರದಿಯನ್ನು ಸಂಸ್ಥೆಗಳು ಸಹಕಾರ ಸಂಘಗಳು ಮತ್ತು ಸ್ವಸಹಾಯ ಸಂಘಗಳ ಆದರೆ ನೋಂದಣಿ ಪತ್ರವನ್ನು ಹಾಗೂ ಬೈಲಾ ಪ್ರತಿನಿಧಿ ನೇಮಕ ನಿರ್ಣಯ ಅರ್ಜಿ ಸಲ್ಲಿಸಿದ ಸಹಕಾರಿ ಸಂಘದ ಮೇಲೆ ಯಾವುದೇ ವಿಚಾರಣೆ ಲಿಕ್ವಿಡೇಶನ್ ನಡವಳಿಕೆ ನಡೆದೇ ಹೋಗುವುದಿಲ್ಲ ಎಂಬುದರ ಬಗ್ಗೆ ಶಿಕ್ಷಣ ಪ್ರಾಧಿಕಾರಯು ನೀಡಿರುವ ದೃಢೀಕರಣ ಪತ್ರವನ್ನು ಸಹ ಹೊಂದಿರಬೇಕು. ಬ್ಯಾಂಕ್ ಪಾಸ್ ಬುಕ್ ಪುಸ್ತಕದ ಪ್ರತಿಯೊಂದು ಹಣಕಾಸು ಹೊಂದಿರುವ ಬಗ್ಗೆ ಮೂರು ಪಾಸ್ಪೋರ್ಟ್ ಸೈಜ್ ಫೋಟೋ ಹಾಗೂ ಯಾವುದೇ ಕ್ರಿಮಿನಲ್ ಪ್ರಕರಣಗಳು ಅಭ್ಯರ್ಥಿಗಳು ಹೊಂದಿಲ್ಲದಿರುವುದರ ಬಗ್ಗೆ ಪೊಲೀಸ್ ಇಲಾಖೆಯಿಂದ ಪೊಲೀಸ್ ವೆರಿಫಿಕೇಶನ್ ರಿಪೋರ್ಟನ್ನು ಸಹ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ :


ಈ ತಿಂಗಳು ಕೊನೆಯ ದಿನಾಂಕವಾಗಿದ್ದು ಅರ್ಜಿ ಸಲ್ಲಿಸಲು ಬಹುತೇಕ ಜಿಲ್ಲೆಗಳಲ್ಲಿ ಅಗತ್ಯ ದಾಖಲೆಗಳನ್ನು ಹೊಂದುವುದರ ಮೂಲಕ ನಿಮ್ಮ ತಾಲೂಕಿನ ಆಹಾರ ಇಲಾಖೆ ಕಚೇರಿಯನ್ನು ಅರ್ಜಿದಾರರು ಭೇಟಿ ಮಾಡಿ ನಮೂನೆ ಅಗತ್ಯ ದೃಡೀಕರಣ ದಾಖಲೆಗಳನ್ನು ಭರ್ತಿ ಮಾಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯನ್ನು ಜಂಟಿ ನಿರ್ದೇಶಕರಿಗೆ ನಿಮ್ಮ ಜಿಲ್ಲೆಯಲ್ಲಿ ಸಲ್ಲಿಸಬೇಕು.

ಇದನ್ನು ಓದಿ : ಜನರಿಗೆ ಬೊಂಬಾಟ್‌ ಆಫರ್.!!‌ ಕೇವಲ 4900 ರೂ. ಹೂಡಿಕೆ ಮಾಡಿದ್ರೆ; ಕ್ಷಣದಲ್ಲಿ ಮಿಲಿಯನೇರ್‌ ಆಗೋದು ಪಕ್ಕಾ

ನ್ಯಾಯಬೆಲೆ ಅಂಗಡಿ ನಡೆಸುವವರಿಗೆ ಹಣ ಪಾವತಿ :

ಪ್ರತಿ ತಿಂಗಳಿಗೆ ಇಂತಿಷ್ಟು ಹಣ ಎಂದು ನ್ಯಾಯಬೆಲೆ ಅಂಗಡಿಯನ್ನು ನಡೆಸುವ ಪ್ರತಿನಿಧಿಗೆ ಪಾವತಿ ಮಾಡುವುದರ ಜೊತೆಗೆ ಆ ಭಾಗದಲ್ಲಿರುವ ಪಡಿತರ ಚೀಟಿದಾರರ ಸಂಖ್ಯೆಗೆ ಅನುಗುಣವಾಗಿ ಸರ್ಕಾರವು ಹೆಚ್ಚುವರಿ ಗೌರವ ಧನವನ್ನು ನೀಡುತ್ತದೆ. ಪಡಿತರ ವಿತರಣಾ ವ್ಯವಸ್ಥೆಯನ್ನು ಪ್ರಸ್ತುತ ರಾಜ್ಯದ್ಯಂತ ಸಂಪೂರ್ಣಗಳನ್ನ ಮಾಡಲಾಗಿದ್ದು ಅರ್ಜಿ ಸಲ್ಲಿಸುವ ಪ್ರತಿನಿಧಿಯು ಕಂಪ್ಯೂಟರ್ ಜ್ಞಾನವನ್ನು ಹೊಂದಿರುವುದು ಅವಶ್ಯಕವಾಗಿದೆ. ಪಡಿತರ ಚೀಟಿದಾರರ ದತ್ತಾಂಶವನ್ನು ಸಾರ್ವಜನಿಕ ವಿತರಣಾ ಪದ್ಧತಿಯ ಗಣಕೀಕರಣದ ಅಡಿಯಲ್ಲಿ ಸಿದ್ಧಪಡಿಸಲಾಗಿರುತ್ತದೆ. ಆಧಾರ್ ಸಂಖ್ಯೆಯನ್ನು ಪ್ರತಿಫಲಾನುಭವಿಯ ಪಡಿತರ ಚೀಟಿಯೊಂದಿಗೆ ಜೋಡಣೆಗೊಳಿಸಲಾಗಿದೆ.

ಹೀಗೆ ರಾಜ್ಯ ಸರ್ಕಾರವು ಹೊಸ ನ್ಯಾಯಬೆಲೆ ಅಂಗಡಿಯನ್ನು ತೆರೆಯಲು ಅರ್ಹ ಫಲಾನುಭವಿಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಫಲಾನಭವಿಗಳು ನ್ಯಾಯಬೆಲೆ ಅಂಗಡಿಯನ್ನು ತೆರೆಯುವುದರ ಮೂಲಕ ಪಡಿತರ ಚೀಟಿದಾರರಿಗೆ ಪಡೆದರವನ್ನು ವಿತರಿಸಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ನ್ಯಾಯಬೆಲೆ ಅಂಗಡಿಯನ್ನು ತೆರೆಯಲು ಯೋಚಿಸುತ್ತಿದ್ದರೆ ಅವರಿಗೆ ಸರ್ಕಾರದಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂಬುದರ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಭರ್ಜರಿ ಗುಡ್ ನ್ಯೂಸ್ : ಸರ್ಕಾರಿ ನೌಕರರಿಗೆ ಡಿಎ ಜೊತೆಗೆ ಸ್ಯಾಲರಿ ಕೂಡ ಹೆಚ್ಚು

ಮಹಿಳೆಯರಿಗೆ ಬಂಪರ್‌ ಕೊಡುಗೆ.!! ಸ್ವಾವಲಂಬಿಯಾಗಲು ಸರ್ಕಾರದ ಹೊಸ ಸ್ಕೀಮ್;‌ ನೀವು ಅಪ್ಲೇ ಮಾಡಿ

Leave a Comment